ನಾಯಕನಾಗಿ ಸೂರ್ಯಕುಮಾರ್ ಯಾದವ್ ಮರಳಿದರೆ, ಉಪನಾಯಕನಾಗಿ ಆರ್ಸಿಬಿಯ ಚಾಂಪಿಯನ್ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ. ಸತತ ಸೋಲಿನಿಂದ ಪ್ರಕಟಿಸಿರುವ ಪರ್ಯಾಯ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದವರು ಯಾರು?
ಟೀಂ ಇಂಡಿಯಾ ಪ್ಲೇಯಿಂಗ್ 11, ಟೀಂ ಇಂಡಿಯಾ ಆಯ್ಕೆ ಕುರಿತು ಹಲವು ಸವಾಲುಗಳು ಎದ್ದಿದೆ. 2026ರ ಟಿ20 ಚಾಂಪಿಯನ್ ತಂಡವೇ ಹೆಚ್ಚು ಸೂಕ್ತ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಅಕಾಶ್ ಚೋಪ್ರಾ ಇದೀಗ ಪರ್ಯಾಯ ಟೀಂ ಇಂಡಿಯಾ ಟಿ20 ತಂಡ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಆರ್ಸಿಬಿ ಚಾಂಪಿಯನ್ ನಾಯಕ ರಜತ್ ಪಾಟೀದಾರ್ ಸ್ಥಾನ ಪಡೆದಿದ್ದಾರೆ.
Lorem Ipsum has been the industry’s standard dummy text ever since the 1500s.
ಅಕಾಶ್ ಚೋಪ್ರಾ ಪ್ರಕಟಿಸಿದ ತಂಡದಲ್ಲಿ ಸೂರ್ಯಕುಮಾರ್ ಯಾದವ್ಗೆ ನಾಯಕ ಸ್ಥಾನ ನೀಡಲಾಗಿದೆ. 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಿಂದ ಕೈಬಿಡಲಾಗಿತ್ತು. ಆದರೆ ಆಕಾಶ್ ಚೋಪ್ಲಾ ಭಾರತ ಮತ್ತೆ ಪುಟಿದೇಳಲು ಸೂರ್ಯಕುಮಾರ್ ಅವಶ್ಯಕತೆ ಎತ್ತಿ ತೋರಿಸಿದ್ದಾರೆ. ಹೀಗಾಗಿ ಪರ್ಯಾ ಟಿ20 ತಂಡದಲ್ಲಿ ಮತ್ತೆ ಸೂರ್ಯಕುಮಾರ್ ಯಾದವ್ಗೆ ನಾಯಕ ಸ್ಥಾನ ನೀಡಲಾಗಿದೆ.
Lorem Ipsum has been the industry’s standard dummy text ever since the 1500s.
ಸತತ 2ನೇ ಬಾರಿಗೆ ರಜತ್ ಪಾಟಿದಾರ್ ಆರ್ಸಿಬಿಗೆ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ರಜತ್ ಪಾಟೀದರ್ ಟೀಂ ಇಂಡಿಯಾಗೆ ಆಯ್ಕೆಯಾಗಬೇಕು, ಅವಕಾಶ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿತ್ತು.ಇದೀಗ ಆಕಾಶ್ ಚೋಪ್ರಾ ಪ್ರಕಟಿಸಿದ ತಂಡದಲ್ಲಿ ರಜತ್ ಪಾಟೀದಾರ್ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ.
Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book.ವಿಶೇಷ ಅಂದರೆ ಅಕಾಶ್ ಚೋಪ್ರಾ ಪ್ರಕಟಿಸಿದ ಟೀಂ ಇಂಡಿಯಾ ಟಿ20 ತಂಡದಲ್ಲಿ ಚಾಂಪಿಯನ್ ಆರ್ಸಿಬಿ ತಂಡದ ಮೂವರು ಸ್ಥಾನ ಪಡೆದಿದ್ದಾರೆ. ನಾಯಕ ರಜತ್ ಪಾಟೀದಾರ್ಗೆ ಉಪನಾಯಕನ ಸ್ಥಾನ ನೀಡಲಾಗಿದ್ದರೆ, ಆಲ್ರೌಂಡರ್ ಕೋಟಾದಲ್ಲಿ ಕ್ರುನಾಲ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಇನ್ನು ಪ್ರಮುಖ ವೇಗಿಯಾಗಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ.
