ಗದಗ ಜಿಲ್ಲೆ ಸಂಪೂರ್ಣ ಬರದ ಸಂಕಷ್ಟದಲ್ಲಿ; ಅರ್ಹ ಪ್ರತಿಯೊಬ್ಬ ರೈತನಿಗೂ ಪರಿಹಾರ ತಲುಪಲಿ: ಸಚಿವ ಬಸವರಾಜ ರಾಯರಡ್ಡಿ
ನರಗುಂದ ತಾಲ್ಲೂಕಿನ ಬರ ಪರಿಸ್ಥಿತಿ ಅವಲೋಕನ ಸಭೆ – ಶೇ. ೭೦ರಿಂದ ೭೫ರಷ್ಟು ಬೆಳೆ ಹಾನಿ ಅಂದಾಜು ನರಗುಂದ: ಗದಗ ಜಿಲ್ಲೆ ಸಂಪೂರ್ಣವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಾಡಿಕೆ ಮಳೆಗಿಂತ ಜಿಲ್ಲೆಯಲ್ಲಿ ಶೇ. ೩೨ರಷ್ಟು ಮಳೆ ಕೊರತೆಯಾಗಿದೆ. ಬೆಳೆ ಹಾನಿಯ ನಿಖರ ಸಮೀಕ್ಷೆ ನಡೆಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಸರ್ಕಾರದ ಪರಿಹಾರ ತಲುಪುವಂತೆ ಅಧಿಕಾರಿಗಳು ಸಮಗ್ರ ಹಾಗೂ ವಾಸ್ತವಿಕ ವರದಿ ಸಲ್ಲಿಸಬೇಕು ಎಂದು ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನರಗುಂದ…
