Top News

ಸಿಎಂ ಡಿಕೆಶಿ ಸಂಧಾನ ಸಕ್ಸಸ್‌ : ನಾಳೆಯಿಂದ್ಲೆ ನಾನು ಸ್ವೀಕರ್ ಆಗಿ ಕೆಲಸ ಮಾಡ್ತೀನಿ ಎಂದ ಟಿಬಿ ಜಯಚಂದ್ರ!

ಬೆಂಗಳೂರು: ಶಿರಾ ಕ್ಷೇತ್ರದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ಅಸಮಾಧಾನ ಶಮನಗೊಳಿಸುವಲ್ಲಿ ಉಪಮುಖ್ಯಮಂತ್ರಿ (ಸಂಧಾನಕಾರ) ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣ ತೀವ್ರ ಅಸಮಾಧಾನಗೊಂಡಿದ್ದ ಜಯಚಂದ್ರ ಅವರ ನಿವಾಸಕ್ಕೆ ರಾತ್ರಿ ಖುದ್ದು ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಸುದೀರ್ಘ ಚರ್ಚೆ ನಡೆಸುವ ಮೂಲಕ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಮಹತ್ವದ ಸಂಧಾನ ಸಭೆಯಲ್ಲಿ ನೂತನ ಸಚಿವ ಬಾಲಕೃಷ್ಣ ಹಾಗೂ ಶಾಸಕ ಡಾ. ರಂಗನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ವಿಧಾನಸಭೆ ಕಲಾಪ…

Read More

ಬೆಂಗಳೂರಲ್ಲಿ ಮಶ್ರೂಮ್ ಬಿರಿಯಾನಿಗೆ ಚಟ್ನಿ ಕೊಟ್ಟಿಲ್ಲವೆಂದು, ಮಾಲೀಕನ ಮೇಲೆ ಹಲ್ಲೆ ನಡೆಸಿ, ಹೋಟೆಲ್ ದ್ವಂಸಗೊಳಿಸಿದ ಕಿಡಿಗೇಡಿಗಳು!

ಬೆಂಗಳೂರು : ಬೆಂಗಳೂರಲ್ಲಿ ಮಶ್ರೂಮ್ ಬಿರಿಯಾನಿ ಜೊತೆಗೆ ಚಟ್ನಿ ಕೊಟ್ಟಿಲ್ಲವೆಂದು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ ದರ್ಪ ಮೆರೆದಿದ್ದು ಕ್ಯಾಶ್ ಕೌಂಟರ್ ಹಾಗು ಟೆಂಟ್ ಧ್ವಂಸಗೊಳಿಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರಿನ ನಾಗರ ಭಾವಿಯ ಸುವರ್ಣ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಅಪ್ಪು ಮಶ್ರೂಮ್ ಬಿರಿಯಾನಿ ಹೋಟೆಲ್ಗೆ ಕಿಟಗೇಡಿಗಳ ಗುಂಪು ಬಂದಿತ್ತು. ಈ ವೇಳೆ ಕಿಡಿಗೇಡಿಗಳು ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಳಿಕ ಬಿರಿಯಾನಿ ಜೊತೆಗೆ ಚಟ್ನಿ ಹಾಕಿ ಕೊಟ್ಟಿಲ್ಲವೆಂದು ಕಿರಿಕ್ ಮಾಡಿದ್ದಾರೆ. ಟೆಂಟ್…

Read More

ಇಂದು ‘ಟಾಕ್ಸಿಕ್’ ಟ್ರೈಲರ್ ಧಮಾಕಾ: ರಾಯ್ ಲುಕ್ ಸ್ಫೋಟಕ್ಕೆ 7:01 PM ಟೈಮ್ ಫಿಕ್ಸ್

ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೂ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ಸಮಯವನ್ನು ಚಿತ್ರತಂಡ ಇದೀಗ ಅಧಿಕೃತವಾಗಿ ಘೋಷಿಸಿದೆ. ಚಿತ್ರತಂಡ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಭಾರೀ ಸ್ಫೋಟ ಮತ್ತು ಬೆಂಕಿಯ ನಡುವೆ ಯಶ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ‘TRAILER 7:01 PM’ ಎಂದು ಉಲ್ಲೇಖಿಸಲಾಗಿದ್ದು, ಇಂದು ಸಂಜೆ 7:01ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ.ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ರಾಯ್…

Read More

ಮುರಿದ ಕಾಲಿಗೆ ರಟ್ಟು ಕಟ್ಟಿದ ಬಿಹಾರದ ಸರ್ಕಾರಿ ಆಸ್ಪತ್ರೆ; ‘ವಾಹ್ ಎಂಥಾ ಪ್ರಯೋಗ’ ಎಂದು ನೆಟ್ಟಿಗರು ಲೇವಡಿ..Bihar

ಮುರಿದ ಕಾಲಿಗೆ ರಟ್ಟು ಕಟ್ಟಿದ ಬಿಹಾರದ ಸರ್ಕಾರಿ ಆಸ್ಪತ್ರೆ; ‘ವಾಹ್ ಎಂಥಾ ಪ್ರಯೋಗ’ ಎಂದು ನೆಟ್ಟಿಗರು ಲೇವಡಿ..Bihar ಸದ್ಯ ಈ ಘಟನೆಯು ಇಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.ಮಂಝೌಲ್ ಉಪ ವಿಭಾಗೀಯ ಆಸ್ಪತ್ರೆಯಿಂದ ಗಾಯಗೊಂಡ ರೋಗಿಯ ಕಾಲಿಗೆ ಬೇರೆಡೆಗೆ ಕಳುಹಿಸುವ ಮೊದಲು ಕಾರ್ಡ್‌ಬೋರ್ಡ್ ತುಂಡುಗಳ ಮೂಲಕ ಬೆಂಬಲ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಟ್ಟು ಕಟ್ಟಿದ ಸಿಬ್ಬಂದಿಆಗಸ್ಟ್​ 3ರ ಸಂಜೆ ಈ ಘಟನೆ ನಡೆದಿದ್ದು, ಹರ್ಸೇನ್​ ಸೇತುವೆ ಬಳಿ ನಡೆದ ಅಪಘಾತದಿಂದಾಗಿ…

Read More

ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿಗಳ ಪರಿಣಾಮ; ಅಮೆರಿಕ ವಿದ್ಯಾರ್ಥಿ ವೀಸಾಗಳಲ್ಲಿ ಭಾರತೀಯರಿಗೆ ಭಾರಿ ಇಳಿಕೆ

ವಾಷಿಂಗ್ಟನ್/ನವದೆಹಲಿ-ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 2025ರ ಮಧ್ಯಭಾಗವು ಸವಾಲಿನ ಅವಧಿಯಾಗಿ ಪರಿಣಮಿಸಿದೆ. ಹೊಸ ವೀಸಾ ಪರಿಶೀಲನಾ ಕ್ರಮಗಳು, ವಲಸೆ ನೀತಿಗಳ ಕಠಿಣತೆ ಮತ್ತು ಅಧ್ಯಯನದ ನಂತರದ ಉದ್ಯೋಗ ಅವಕಾಶಗಳ ಬಗ್ಗೆ ಉಂಟಾಗಿರುವ ಅನಿಶ್ಚಿತತೆಯ ನಡುವೆ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅಮೆರಿಕದ F-1 ವಿದ್ಯಾರ್ಥಿ ವೀಸಾಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ವಲಸೆ ಅಧ್ಯಯನ ಕೇಂದ್ರ (Center for Immigration Studies – CIS) ವಿಶ್ಲೇಷಣೆಯ ಪ್ರಕಾರ, 2025ರ ಮೇ-ಆಗಸ್ಟ್ ಅವಧಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ…

Read More

ಬಿ.ನಾಗೇಂದ್ರಗೆ ಎಸ್‌‍ಐಟಿಯಿಂದ ಕ್ಲೀನ್‌ಚಿಟ್‌ : ಸಚಿವ ಜಮೀರ್‌

ಚಿತ್ರದುರ್ಗ, ಆ.7- ಬಳ್ಳಾರಿ ಜಿಲ್ಲೆಯ ಸಚಿವ ಬಿ. ನಾಗೇಂದ್ರ ವಿರುದ್ಧ ಕೇಳಿಬಂದಿದ್ದ ಆರೋಪಗಳ ಕುರಿತು ವಿಶೇಷ ತನಿಖಾ ದಳ (ಎಸ್‌‍ಐಟಿ) ತನಿಖೆ ನಡೆಸಿ ಕ್ಲೀನ್‌ಚಿಟ್‌ ನೀಡಿದೆ. ಹೀಗಿದ್ದರೂ ಪ್ರಕರಣ ಎಲ್ಲಿ ಬಾಕಿ ಇದೆ ಎಂದು ಸಚಿವ ಜಮೀರ್‌ ಅಹದ್‌ ಖಾನ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತರಕ್ಕೆ ಬೆಳೆದವರ ವಿರುದ್ಧ ರಾಜಕೀಯವಾಗಿ ಪಿತೂರಿ ನಡೆಸುವುದು ಸಹಜ. ಸಾಮಾನ್ಯ ಜನರ ಮೇಲೆ ಈ ರೀತಿಯ ಪಿತೂರಿಗಳು ನಡೆಯುವುದಿಲ್ಲ. ಬಿ. ನಾಗೇಂದ್ರ ಅವರು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿರುವ ಕಾರಣ ಅವರ…

Read More

ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ : ಪ್ರತಾಪ್ ಸಿಂಹ ವಾಗ್ದಾಳಿ!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ತಮ್ಮದೇ ಪಕ್ಷದ ಹಿರಿಯ ನಾಯಕರ ರಾಜಕೀಯ ಜೀವನವನ್ನು ಮುಗಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಗನನ್ನು ಸಚಿವರನ್ನಾಗಿ ಮಾಡಲು ಅಲ್ಲಿನ ನಾಯಕರನ್ನು ಮೂಲೆಗುಂಪು ಮಾಡಿದರೆ, ಮೈಸೂರು ಭಾಗದಲ್ಲಿ ಶಾಸಕ ಯತೀಂದ್ರ ಅವರನ್ನು ನಾಯಕನನ್ನಾಗಿ ಬೆಳೆಸಲು ಸಿದ್ದರಾಮಯ್ಯ ಅವರು ಡಾ. ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಹಾಗೂ…

Read More

ಕರ್ನಾಟಕ ವಿಧಾನ ಪರಿಷತ್ ಸಭಾಪತಿ, ಉಪ ಸಭಾಪತಿ ಆಯ್ಕೆಗೆ ಮುಹೂರ್ತ ಫಿಕ್ಸ್: ಆ.14ರಂದು ಚುನಾವಣೆ ನಿಗದಿ

ಬೆಂಗಳೂರು: “ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಟ್ಟಿ ಅವರು ದೇಶದ ವಿಧಾನ ಪರಿಷತ್…

Read More

ಖಾತೆ ಹಂಚಿಕೆ ವಿಳಂಬ: ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಿಎಂ ಡಿ.ಕೆ.ಶಿವಕುಮಾರ್; ಬಿ.ಎಸ್.ಯಡೀಯೂರಪ್ಪ ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಂದು ಟಾಂಗ್

ಬೆಂಗಳೂರು: ಖಾತೆ ಹಂಚಿಕೆ ವಿಳಂಬ ವಿಚಾರವಾಗಿ ವಿಅಪ್ಕ್ಷ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ನಡೆಸುತ್ತಿದ್ದ ವಾಗ್ದಾಳಿ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಖಾತೆ ಹಂಚಿಕೆ ಮಾಡಲು ಇನ್ನೂ ಸಮಯವಿದೆ. ಶೀಘ್ರದಲ್ಲಿ ಆಗಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಅವರು ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಷ್ಟು ದಿನ ದೆಹಲಿಯಲ್ಲೇ ಉಳಿದುಕೊಂಡಿರಲಿಲ್ಲ? ಖಾತೆ ಹಂಚಿಕೆ ಶೀಘ್ರದಲ್ಲೇ ಆಗಲಿದೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ. ಸದನದಲ್ಲಿ ಹೊಸ ಸಚಿವರ…

Read More

‘ದಿ ಹಂಡ್ರೆಡ್’ ಲೀಗ್‌ನಲ್ಲಿ ವಿಲ್ ಜ್ಯಾಕ್ಸ್ ಅದ್ಭುತ ಕ್ಯಾಚ್: ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದ ಇಂಗ್ಲೆಂಡ್ ಆಲ್ರೌಂಡರ್!

ದಿಹಂಡ್ರೆಡ್ 2026 ಲೀಗ್‌ನಲ್ಲಿ ಇಂಗ್ಲೆಂಡ್‌ನ ತಾರಾ ಆಲ್ರೌಂಡರ್ ವಿಲ್ ಜ್ಯಾಕ್ಸ್ ಹಿಡಿದ ನಂಬಲಾಗದ ಕ್ಯಾಚ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಲಾರ್ಡ್ಸ್ ಮೈದಾನದಲ್ಲಿ ಲಂಡನ್ ಸ್ಪಿರಿಟ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಐ ಲಂಡನ್ ತಂಡ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಈ ವೇಳೆ ವಿಲ್ ಜ್ಯಾಕ್ಸ್ ಬೌಂಡರಿ ಲೈನ್ ಬಳಿ ತೋರಿದ ಅದ್ಭುತ ಫೀಲ್ಡಿಂಗ್ ಪಂದ್ಯಕ್ಕೆ ಪ್ರಮುಖ ತಿರುವು ನೀಡಿತು. ಲಂಡನ್ ಸ್ಪಿರಿಟ್ ಇನ್ನಿಂಗ್ಸ್‌ನ 49 ನೇ ಎಸೆತದಲ್ಲಿ ಈ ರೋಚಕ ಘಟನೆ…

Read More
error: Content is protected !!